ನಾನು ನಾನೆಂಬ ಹಮ್ಮಿನಲಿ ಬೀಗಿ

ನಾನು ನಾನೆಂಬ ಹಮ್ಮಿನಲಿ ಬೀಗಿ
ಸುಮ್ಮನೇ ನವೆದೆ ಅಜ್ಞಾನಿಯಾಗಿ
ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ
ಲೋಕಕಾಸರೆ ಎಂದು ತಿಳಿಯದಾಗಿ

ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ
ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ
ಕಣ್ಣಿದ್ದರೂ ಏನು, ಕತ್ತಲಲಿ ಕುರುಡನೇ,
ನಿನ್ನ ಬೆಳಕೇ ಕಾಣ್ಕೆ ತಿಳಿದೆ ಕಡೆಗೂ

ಬಾವಿತೋಟದ ನೀರ ಹೀರಿ ಚಿಮ್ಮಿದ ಪಯಿರ
ತನ್ನ ಸಾಧನೆ ಎಂದು ತಿಳಿದ ಮೂಢ,
ಮಳೆಯೆ ಬಾರದ ಬಾವಿ ತಳ ಆರಿ ಅಣಕಿಸಲು
ಬಾನಕೃಪೆ ಏನೆಂದು ತಿಳಿದೆ ಈಗ!

ನನ್ನ ಅವಿವೇಕಗಳ ಸಾಕಿ ನಗುವುದು ಯಾಕೆ?
ತಿಳಿವ ನೀಡದೆ ಹೀಗೆ ತುಳಿದೆ ಏಕೆ?
ನೀ ಕೊಡದೆ ಯಾವುದಿದೆ ಜ್ಞಾನವೇ ಮಾನವೇ ?
ಗಾನವಿಲ್ಲದ ತಾಳ ಇಡಿಯ ಬದುಕೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೫೧
Next post ಇನ್ನೆಷ್ಟು ದಿನ ಹೀಗೆ?

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys